ಬಜಾಲ್: ಖಾಸಗಿ ಚಾನೆಲ್ ನಿರೂಪಕನ ಬಂಧನಕ್ಕೆ ಒತ್ತಾಯಿಸಿ ಜ.12 ರಂದು ಪ್ರತಿಭಟನೆ
Update: 2019-01-11 13:10 GMT
ಮಂಗಳೂರು,ಜ.11: ಪ್ರವಾದಿ ಮುಹಮ್ಮದ್ (ಸ) ರ ಬಗ್ಗೆ ನಿಂದನೆಯ ಮಾತನ್ನಾಡಿದ ಆರೋಪ ಎದುರಿಸುತ್ತಿರುವ ಖಾಸಗಿ ಚಾನೆಲ್ ನಿರೂಪಕ ಅಜಿತ್ ಹನುಮಕ್ಕನವರ್ ಬಂಧನಕ್ಕೆ ಆಗ್ರಹಿಸಿ ಬಜಾಲ್ ನಂತೂರು ಫೈಸಲ್ ನಗರ ಮುಸ್ಲಿಂ ಒಕ್ಕೂಟದಿಂದ ಜ.12 ರಂದು ಸಂಜೆ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆಯಲಿದೆ.
ಶನಿವಾರ ಮಗ್ರಿಬ್ ನಮಾಝ್ ಬಳಿಕ ಬಜಾಲ್ ನಂತೂರು ಜಂಕ್ಷನಿಂದ ಪ್ರತಿಭಟನೆ ಮತ್ತು ಕಾಲ್ನಡಿಗೆ ಜಾಥಾವು ಪ್ರಾರಂಭಗೊಳ್ಳಲಿದ್ದು, ಎಲ್ಲರೂ ಪ್ರತಿಭಟನಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.