ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2019-01-11 17:17 GMT
ಗಂಗೊಳ್ಳಿ, ಜ.11: ಮರವಂತೆ ಬ್ರೇಕ್ ವಾಟರ್ ಬಳಿ ಡಿ.10ರಂದು ಸಂಜೆ ವೇಳೆ ದೋಣಿಯಲ್ಲಿ ಬಲೆ ಎಳೆಯುತ್ತಿದ್ದ ಮೀನುಗಾರರೊಬ್ಬರು ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮರವಂತೆ ಗ್ರಾಮದ ಸಿಲ್ಯಾಂಡ್ ಬಳಿಯ ನಿವಾಸಿ ಮಾಚ ಖಾರ್ವಿ ಎಂಬವರ ಮಗ ಶೇಷ ಖಾರ್ವಿ(45) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಹೋಗಿ ಬಂದು ದೋಣಿಯಲ್ಲಿ ಬಲೆ ಎಳೆಯುತ್ತಿದ್ದಾಗ ಸಮುದ್ರಕ್ಕೆ ಆಯತಪ್ಪಿನೀರಿನಲ್ಲಿ ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಎತ್ತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಶೇಷ ಖಾರ್ವಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.