ಮಡಂತ್ಯಾರ್ ಮಸೀದಿಗೆ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಭೇಟಿ
ಮಂಗಳೂರು, ಜ.11: ಅಖಿಲ ಭಾರತ ಸುನ್ನೀ ಜಮೀಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಮಡಂತ್ಯಾರು ನೂರುಲ್ ಹುದಾ ಜುಮಾ ಮಸೀದಿಗೆ ಭೇಟಿ ನೀಡಿ ದುಆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮಸೀದಿಯ ಆಡಳಿತ ಸಮಿತಿಯ ವತಿಯಿಂದ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಅವರನ್ನು ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಬ್ಬಾಸ್ ಹಾಜಿ ಉಳ್ಳಾಲ, ಶಾಕಿರ್ ಹಾಜಿ ಹೈಸಂ ಕಣ್ಣೂರು, ಮುಮ್ತಾಝ್ ಅಲಿ ಅವರನ್ನು ಶೈಖುನಾ ಸುಲ್ತಾನುಲ್ ಉಲಮಾ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಾದಿ ಇರ್ಫಾನ್ ಚೇರ್ಮನ್ ಸೈಯದ್ ಫಝಲ್ ಜಮಾಲುಲ್ಲೈಲಿ ತಂಙಳ್, ಸೈಯದ್ ಅಬ್ದುಸ್ಸಲಾಂ ತಂಙಳ್ ಪೂಂಜಾಲಕಟ್ಟೆ, ಜಮಾಅತ್ ಅಧ್ಯಕ್ಷ ನಝೀರ್ ಹಾಜಿ, ನಿರ್ದೇಶಕ ಹೈದರ್ ಬಿ., ಉಪಾಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್, ಕೋಶಾಧಿಕಾರಿ ಇಸ್ಮಾಯೀಲ್ ಪಿ.ಎಂ., ಗೌರವಾಧ್ಯಕ್ಷ ಮುಹಮ್ಮದ್ ಮಡಂತ್ಯಾರು, ಕೆಸಿಎಫ್ ದೋಹ ಖತಾರ್ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಪುಂಜಾಲಕಟ್ಟೆ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಅಯ್ಯೂಬ್ ಮಹ್ಲರಿ, ಕೋಶಾಧಿಕಾರಿ ನಝೀರ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ನೂರುಲ್ ಹುದಾ ಜುಮಾ ಮಸೀದಿಯ ಖತೀಬರಾದ ಅಲ್ ಹಾಜಿ ಎಂ.ಎ. ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.