ಜ. 20: ಮಂಗಳೂರಿನಲ್ಲಿ ಗಾಣಿಗ ಸಂಗಮ

Update: 2019-01-12 14:06 GMT

ಮಂಗಳೂರು, ಜ.12: ಗಾಣಿಗಾಸ್ ಯಾನೆ ಸಫಲಿಗಾಸ್ ಪರಿವಾರ್ (ರಿ) ಫೇಸ್‌ಬುಕ್ ತಂಡದ ವತಿಯಿಂದ ಗಾಣಿಗ ಪರಿವಾರ್ ವೇದಿಕೆಯಲ್ಲಿ 4ನೇ ವರ್ಷದ ‘ಗಾಣಿಗ ಸಂಗಮ- 2019ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ವು ಜ. 20ರಂದು ಬೆಳಗ್ಗೆ 8:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಗುಂಪು ನೃತ್ಯ ಸ್ಪರ್ಧೆ ಮತ್ತು ವೈಯುಕ್ತಿಕ ನೃತ್ಯ ಸ್ಪರ್ಧೆಗೆ ಅವಕಾಶವಿದೆ. ಜೂನಿಯರ್, ಸಬ್‌ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ, ಅಶಕ್ತ ಕುಟುಂಬಗಳಿಗೆ ಸಹಾಯ ಧನ ಹಂಚಿಕೆ ನಡೆಯಲಿದೆ.

ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಮೇಜರ್ ದಾಮೋದರ್ ಎಸ್., ಜೀ ಕನ್ನಡ ಟಿವಿ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ರನ್ನರ್ ಅಪ್ ಸೂರಜ್ ಕುಮಾರ್, ಅಂತಾರಾಷ್ಟ್ರೀಯ ಕರಾಟೆ ಪಟು ರಂಜಿತ ಎಸ್. ಮುಂಡ್ಕೂರು, ಅಂತಾರಾಷ್ಟ್ರೀಯ ಮಟ್ಟದ ನೃತ್ಯಪಟು ಗೌತಮ್ ಗಾಣಿಗ ಮತ್ತಿರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News