ಮಂಗಳೂರು: ಜ.14ರಿಂದ ರಾ. ಹೆದ್ದಾರಿ ಅಪೂರ್ಣ ವಿರೋಧಿಸಿ ಕಾಂಗ್ರೆಸ್ ಕಾಲ್ನಡಿಗೆ ಜಾಥ

Update: 2019-01-12 14:18 GMT

ಮಂಗಳೂರು, ಜ. 12: ಹಾಸನದಿಂದ ಮಂಗಳೂರಿನ ಬಿಸಿರೋಡ್ ಹೆದ್ದಾರಿವರೆಗಿನ ಕಾಮಗಾರಿ ಅಪೂರ್ಣವಾಗಿರುವುದನ್ನು ವಿರೋಧಿಸಿ ಜ.14 ರಿಂದ 16ವರೆಗೆ‌ ಕಾಲ್ನಡಿಗೆ ಜಾಥ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ ಜನರ ಜೀವ ಉಳಿಸಿ ಎಂಬ ಘೋಷಣೆಯೊಂದಿಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಜ. 14ರಂದು ನಡೆಯುವ ಕಾಲ್ನಡಿಗೆ ಜಾಥಾವನ್ನು ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ  ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು‌, ಜ. 16ರ ಸಮಾರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬರಲಿದ್ದಾರೆ. ಜ. 14. ರಂದು ನೆಲ್ಯಾಡಿಯಿಂದ ಉಪ್ಪಿನಂಗಡಿಯವರೆಗೆ, ಜನವರಿ 15ರಂದು ಉಪ್ಪಿನಂಗಡಿಯಿಂದ ಮಾಣಿಯವರೆಗೆ  ಜ.16ರಂದು ಮಾಣಿಯಿಂದ ಹೊರಡುವ ಕಾಲ್ನಡಿಗೆ ಜಾಥಾ ಬಿಸಿ ರೋಡ್ ವರೆಗೆ ನಡೆಯಲಿದೆ‌ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News