ಎರ್ಮಾಳು: ಎಕ್ಸ್‌ಪ್ರೆಸ್ ಬಸ್‌ಗಳಿಂದ ನಿಲುಗಡೆ

Update: 2019-01-12 15:11 GMT

 ಉಡುಪಿ, ಜ.12: ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯ ದಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ಎಲ್ಲಾ ತಡೆರಹಿತ ಬಸ್ಸುಗಳಿಗೆ ಎರ್ಮಾಳು ದೇವಸ್ಥಾನದ ವಠಾರದಲ್ಲಿ ನಿಲುಗಡೆ ನೀಡುವಂತೆ ಸೂಚಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಬೆಳಗ್ಗೆ 5 ರಿಂದ 7:30ರವರೆಗೆ ಹಾಗೂ ರಾತ್ರಿ 8:30ರ ನಂತರ ಎರ್ಮಾಳ್ ದೇವಸ್ಥಾನದ ಮುಂಭಾಗದ ನಿಲ್ದಾಣದಲ್ಲಿ ತಪ್ಪದೇ ನಿಲುಗಡೆ ನೀಡುವಂತೆ, ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳು ವುದಾಗಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಆರ್.ಎಂ. ವರ್ಣೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News