ಸಮುದ್ರದಲ್ಲಿ ದೋಣಿ ಮಗುಚಿ ಮೀನುಗಾರ ಮೃತ್ಯು

Update: 2019-01-12 16:35 GMT

ಕುಂದಾಪುರ, ಜ.12: ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿಗೆ ಅಲೆಯೊಂದು ಅಪ್ಪಳಿಸಿದ ಪರಿಣಾಮ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಜ.12ರಂದು ಬೆಳಗಿನ ಜಾವ ಗೋಪಾಡಿ ಗ್ರಾಮದ ಚರ್ಕಿಕಡು ಎಂಬಲ್ಲಿ ನಡೆದಿದೆ.

ಮೃತರನ್ನು ಗೋಪಾಡಿ ಗ್ರಾಮದ ನರಸಿಂಹ ಮೊಗವೀರ (66) ಎಂದು ಗುರುತಿಸಲಾಗಿದೆ. ಇವರು ರಾಮ ಮೊಗವೀರ ಮತ್ತು ರಾಘವೇಂದ್ರ ಎಂಬವ ರೊಂದಿಗೆ ಭಾಗೀರಥಿ ಎಂಬ ನಾಡದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದು, ಈ ವೇಳೆ ಸಮುದ್ರದ ಅಲೆಯೊಂದು ದೋಣಿಗೆ ಅಪ್ಪಳಿಸಿತ್ತೆ ನ್ನಲಾಗಿದೆ. ಇದರಿಂದ ದೋಣಿ ಮಗುಚಿದ ಪರಿಣಾಮ ಅದರಲ್ಲಿದ್ದ ಮೂವರು ಸಮುದ್ರ ನೀರಿಗೆ ಬಿದ್ದರು. ಅವರಲ್ಲಿ ರಾಮ ಮತ್ತು ರಾಘವೇಂದ್ರ ನೀರಿನಿಂದ ಮೇಲೆ ಬಂದಿದ್ದು, ನರಸಿಂಹ ಮೊಗವೀರ ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News