ಜೂಜಾಟ: ಮೂವರ ಬಂಧನ
Update: 2019-01-12 16:38 GMT
ಉಡುಪಿ, ಜ.12: ನಾಲ್ಕೂರು ಪೇಟೆಯ ಸಮುದಾಯ ಭವನದ ಹಿಂಭಾಗ ಜ.11ರ ಮಧ್ಯರಾತ್ರಿ ಗರಗರ ಮಂಡಲ ಎಂಬ ಜೂಜಾಟ ಆಡುತ್ತಿದ್ದ ಮೂವರನ್ನು ಉಡುಪಿಯ ಸೆನ್ ಪೊಲೀಸರು ಬಂಧಿಸಿದ್ದಾರೆ.
ನಾಲ್ಕೂರು ಮುದ್ದೂರಿನ ಅರುಣ್ ಶೆಟ್ಟಿ(40), ಮುದ್ದೂರು ಅರ್ಬಿಯ ವಿಜಯ(21), ಹರೀಶ್(23) ಬಂಧಿತ ಆರೋಪಿಗಳು. ಇವರಿಂದ 12,180 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.