ಪತ್ರಕರ್ತರ ಕ್ಷೇಮನಿಧಿಗೆ ತಮ್ಮ ವೇತನದಿಂದ 50 ಸಾವಿರ ರೂ. ಕೊಡುಗೆ ನೀಡಿದ ಸಚಿವ ಖಾದರ್

Update: 2019-01-16 14:38 GMT

ಮಂಗಳೂರು, ಜ.16: ಪತ್ರಕರ್ತರು ಪ್ರಜಾಪ್ರಭುತ್ವದ 4ನೇ ಅಂಗವಾಗಿದ್ದು, ಸಮಾಜದ ಒಳಿತು ಕೆಡಕು ಪ್ರಶ್ನಿಸುವುದು ಮಾಧ್ಯಮವಾಗಿದೆ. ಹಾಗಾಗಿ ಪತ್ರಕರ್ತರಿಗೆ ಸೂಕ್ತ ಸಾಮಾಜಿಕ ಭದ್ರತೆಗಾಗಿ ಕ್ಷೇಮಾಭಿವೃದ್ಧಿ ಕಾರ್ಯಕ್ಕೆ 50,000 ರೂ.ಅನ್ನು ತಮ್ಮ ವೇತನದಿಂದ ನೀಡುವುದಾಗಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿವಿ ಕಾಲೇಜು ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಭಾಗಿತ್ವದಲ್ಲಿ ಬುಧವಾರ ನಡೆದ ‘ಮಾಧ್ಯಮ ಕಾರ್ಯಾಗಾರ’ದಲ್ಲಿ ಪತ್ರಕರ್ತರ ಕ್ಷೇಮನಿಧಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಸ್ತೆ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಪತ್ರಕರ್ತರೊಬ್ಬರಿಗೆ ಇದೇ ಸಂದರ್ಭದಲ್ಲಿ ಹತ್ತು ಸಾವಿರ ರೂ.ನ್ನು ಯೂನಿಯನ್ ವತಿಯಿಂದ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News