ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹ

Update: 2019-01-16 15:59 GMT

ಉಡುಪಿ, ಜ.16: ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆ ಯಾಗಿರುವ ಸುವರ್ಣ ತ್ರಿಭುಜ ಬೋಟ್‌ನಲ್ಲಿದ್ದ ಮೀನುಗಾರರ ಪತ್ತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನೂ ಹೆಚ್ಚು ಪ್ರಯತ್ನ ನಡೆಸಬೇಕು. ಇನ್ನಷ್ಟು ಆಧುನಿಕ ಸವಲತ್ತು, ಸಲಕರಣೆಗಳನ್ನು ಉಪಯೋಗಿಸಿ ಶೀಘ್ರ ಮೀನುಗಾರರ ಪತ್ತೆಗೆ ಶ್ರಮಿಸಬೇಕು. ಆ ಮೂಲಕ ಆತಂಕದಲ್ಲಿರುವ ಮೀನುಗಾರರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಯೂನಿಯನ್ (ಕೆಎಸ್‌ಎಲ್‌ಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮುದ್ರಾಡಿ ಬಿ. ವಿಷ್ಣು ಉಪಾಧ್ಯಾಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News