ಸಾಲೆತ್ತೂರು: ಹರಕೆ ಡಬ್ಬಿಗೆ ಡಾಮಾರು ಹಾಕಿದ ದುಷ್ಕರ್ಮಿಗಳು
Update: 2019-01-16 16:03 GMT
ವಿಟ್ಲ, ಜ. 16: ಸಾಲೆತ್ತೂರು ಕೇಂದ್ರ ಜುಮಾ ಮಸೀದಿಯ ಹರಕೆ ಡಬ್ಬಿಗೆ ದುಷ್ಕರ್ಮಿಗಳು ಡಾಮಾರು ಎರಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಾಲೆತ್ತೂರು ಬದ್ರಿಯ ಜುಮಾ ಕೇಂದ್ರ ಮಸೀದಿಗೆ ಒಳಪಟ್ಟ ಹರಕೆ ಡಬ್ಬಿಗೆ ದುಷ್ಕರ್ಮಿಗಳು ಡಮಾರು ಎರಚಿ ಧಾರ್ಮಿಕ ಭಾವನೆಗೆ ಘಾಸಿಗೊಳಿಸಿದೆ ಎಂದು ಜಮಾಅತ್ ಆಡಳಿತ ಮಂಡಳಿಯು ಪೊಲೀಸ್ ದೂರಿನಲ್ಲಿ ತಿಳಿಸಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.