ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಗಣಿಗಣಿತ ಸಪ್ತಾಹ

Update: 2019-01-16 16:15 GMT

ಮಂಗಳೂರು, ಜ.16: ನಗರದ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾದ ‘ಗಣಿ ಗಣಿತ ಸಪ್ತಾಹ’ವನ್ನು ಅಂತಾರಾಷ್ಟ್ರೀಯ ಕಲಾವಿದ ಜಿ. ಕಂದನ್ ಮಂಗಳವಾರ ಉದ್ಘಾಟಿಸಿದರು.

ವಿಶ್ವಕ್ಕೆ ಭಾರತದ ಕೊಡುಗೆಯಾದ ಸೊನ್ನೆಯನ್ನು ಬರೆದು ಅದರ ಮೇಲೆ ಚಿತ್ರ ಬಿಡಿಸಿ, ಆ ಬಳಿಕ ವಿದ್ಯಾರ್ಥಿಗಳೆಲ್ಲಾ ವಿವಿಧ ಆಕೃತಿಗಳನ್ನು ಅದರ ಮೇಲೆ ಅಂಟಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಲಾಯಿತು.

ಮೊದಲ ದಿನ ಸುಳ್ಯ ರೋಟರಿ ಹೈಸ್ಕೂಲ್‌ನ ಮುಖ್ಯಶಿಕ್ಷಕ ಅಚ್ಯುತ ಅಟ್ಲೂರು ಸುಳ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಕೇಂದ್ರದ ಸಂಚಾಲಕ ಗೋಪಾಡ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲೆ ಸುಮಾಡ್ಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News