ಜ.19: ದೇರಳಕಟ್ಟೆಯಲ್ಲಿ ಮಿತ್ತಬೈಲ್ ಉಸ್ತಾದರ ಅನುಸ್ಮರಣೆ
Update: 2019-01-16 16:34 GMT
ಮಂಗಳೂರು, ಜ.16: ಎಸ್ಕೆಎಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ ಜ.19ರಂದು ರಾತ್ರಿ 7 ಗಂಟೆಗೆ ಶಂಸುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಅನುಸ್ಮರಣೆಯು ದೇರಳಕಟ್ಟೆ ಗ್ರೀನ್ಗ್ರೌಂಡ್ನಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸೈಯದ್ ಹಾರಿಸಲಿ ಶಿಹಾಬ್ ತಂಙಳ್ ದುಆಕ್ಕೆ ನೇತೃತ್ವ ನೀಡಲಿದ್ದಾರೆ. ಪ್ರಭಾಷಣಗಾರ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.