ಉಚ್ಚಿಲ: ಮೊಟಿವೇಶನ್ ತರಗತಿ ಕಾರ್ಯಕ್ರಮ

Update: 2019-01-17 15:58 GMT

ಕಾಪು, ಜ.17: ಎಸ್‌ವೈಎಸ್ ಉಚ್ಚಿಲ ಘಟಕದ ವತಿಯಿಂದ ಮೊಟಿವೇಶನ್ ತರಗತಿ ಕಾರ್ಯಕ್ರಮವು ಮುಳ್ಳಗುಡ್ಡೆಯ ಮಯ್ಯದ್ದಿ ನಿವಾಸದ ವಠಾರದಲ್ಲಿ ಇತ್ತೀಚೆಗೆ ಜರಗಿತು.

ಕಾರ್ಯಕ್ರಮವನ್ನು ಮೂಳೂರು ಜುಮಾ ಮಸೀದಿಯ ಉಪ ಖತೀಬ್ ಹೈದರ್ ಅಹ್ಸನಿ ದುವಾದೊಂದಿಗೆ ಉದ್ಘಾಟಿಸಿದರು. ಎಸ್‌ವೈಎಸ್ ಉಚ್ಚಿಲ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚಿಲ ಬಡಾ ಗ್ರಾಪಂ ಸದಸ್ಯ ರಫೀಕ್ ದೀವ್ ಶುಭ ಹಾರೈಸಿದರು.

ಎಸ್‌ಎಸ್‌ಎಫ್ ಉಚ್ಚಿಲ ಸೆಕ್ಟರ್ ಅಧ್ಯಕ್ಷ ಜಾಫರ್ ಸಾಧಿಕ್, ಜಿಲ್ಲಾ ಉಪಾಧ್ಯಕ್ಷ ಶಬ್ಬೀರ್ ಸಖಾಫಿ, ಸಯ್ಯದ್ ಅರಬಿ ಮದ್ರಸದ ಅಧ್ಯಾಪಕ ಸಾಹುಲ್ ಹಮೀದ್ ನಯಿಮಿ ಕನ್ನಂಗಾರ್, ಎಸ್‌ವೈಎಸ್ ಉಚ್ಚಿಲ ಘಟಕದ ಉಪಾಧ್ಯಕ್ಷ ಶಬ್ಬೀರ್ ಇಸ್ಮಾಯಿಲ್, ಕೋಶಾಧಿಕಾರಿ ಪಿ.ಪಿ.ಅಬ್ದುಲ್ ಕರೀಂ ಪೊಲ್ಯ, ಇಬ್ರಾಹಿಂ ಮುಳ್ಳಗುಡ್ಡೆ, ರಿಜ್ವಾನ್ ಉಸ್ಥಿತರಿದ್ದರು.

ಎಸ್‌ವೈಎಸ್ ಉಚ್ಚಿಲ ಘಟಕದ ಕಾರ್ಯದರ್ಶಿ ಇಲ್ಯಾಸ್ ಸ್ವಾಗತಿಸಿದರು. ಎಸ್‌ಎಸ್‌ಎಫ್ ಮುಖಂಡ ಆದೀಲ್ ಹೊನ್ನಾವರ ವಂದಿಸಿದರು. ಜುನೈದ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಈ ತರಗತಿಯಲ್ಲಿ ಪಣಿಯೂರು, ಕುಂಜೂರು, ಪೊಲ್ಯ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಘಟಕಗಳ ಸುಮಾರು 100ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News