ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2019-01-17 15:52 GMT

ಶಂಕರನಾರಾಯಣ, ಜ.17: ವೈಯಕ್ತಿಕ ಕಾರಣದಿಂದ ಮನನೊಂದ ಯಡ ಮೊಗ್ಗೆ ಗ್ರಾಮದ ಕಾರೂರು ನಿವಾಸಿ ರಾಘವೇಂದ್ರ ಆಚಾರಿ(35) ಎಂಬವರು ಜ.16ರಂದು ಸಂಜೆ ವೇಳೆ ಎಂಬಲ್ಲಿ ಮನೆಯ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು:   ಉದ್ಯಾವರ ಗ್ರಾಮದ ಬೋಳಾರಗುಡ್ಡೆ ವಿಜಯರಾಜ್ ಹೆಗ್ಡೆ(45) ಎಂಬವರು ಜ. 15ರ ಮಧ್ಯಾಹ್ನದಿಂದ ಜ.16ರ ಬೆಳಗಿನ ಮಧ್ಯಾವಧಿಯಲ್ಲಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News