ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ: 6 ಮಂದಿಯ ಬಂಧನ

Update: 2019-01-18 16:46 GMT

ಮಂಗಳೂರು, ಜ.18: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರಿಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ಸಿಸಿಬಿ ಮತ್ತು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಇತರರಿಗಾಗಿ ಶೋಧ ಮುಂದುವರಿದಿದೆ.

ಜೋಯಲ್, ಮೋಹಿತ್, ಲಿಖೀತ್, ದೇವರಾಜ್, ಗಣೇಶ್, ರಾಘವೇಂದ್ರ ಬಂಧಿತರು. ಇವರಲ್ಲದೇ ಹೇಮಂತ್ ರೈ ಯಾನೆ ಮುನ್ನ, ಕಿಶೋರ್ ಸನಿಲ್, ಕಿಶೋರ್ ಅಡ್ಯಾರ್, ಗಣೇಶ್ ಕೆಲರಾಯ್ ಎಂಬವರು ತಪ್ಪಿಸಿಕೊಂಡವರು.

ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬೋಂದೆಲ್‌ನ ಸಚ್ಚು ಯಾನೆ ಜಯೇಶ್ (48) ನನ್ನು ಬಂಧಿಸಲು ಪೊಲೀಸರು ನೀರುಮಾರ್ಗ ಕೆಲರಾಯ್ ಸಮೀಪ ಬುಧವಾರ ರಾತ್ರಿ ತೆರಳಿದ್ದರು. ಇದನ್ನು ತಿಳಿದ ಸಂಘಟನೆಯೊಂದರ 9 ಮಂದಿಯ ತಂಡವು ಬಂಧನಕ್ಕೆ ಅಡ್ಡಿಪಡಿಸಿತ್ತು. ಈ ವೇಳೆ ಆರೋಪಿ ಪರಾರಿಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News