ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ

Update: 2019-01-19 16:34 GMT

ಅಮಾಸೆಬೈಲು, ಜ.19: ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಮಾಸೆಬೈಲು ಪೊಲೀಸರು ಜ.18ರಂದು ಮಧ್ಯರಾತ್ರಿ ವೇಳೆ ಅಮಾಸೆಬೈಲು ಪೇಟೆಯಲ್ಲಿ ಬಂಧಿಸಿದ್ದಾರೆ.

ಮಂಗಳೂರು ಗುರುಪುರ ಕೈಕಂಬ ನಿವಾಸಿಗಳಾದ ಅಶ್ರಫ್ (28) ಹಾಗೂ ಶ್ರೀನಿವಾಸ ಶೆಟ್ಟಿ (29) ಬಂಧಿತ ಆರೋಪಿಗಳಾಗಿದ್ದು, ಮಂಗಳೂರು ಗಂಜಿ ಮಠ ನಿವಾಸಿಗಳಾದ ನವೀದ್ ಹಾಗೂ ಅಶೀಫ್ ಎಂಬ ವರು ಓಡಿ ಪರಾರಿಯಾಗಿದ್ದಾರೆ.

ಬಂಧಿತರಿಂದ ವಾಹನ ಹಾಗೂ ಏಳು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News