ಭಟ್ಕಳ: ಮನೆಗೆ ನುಗ್ಗಿ ನಗ-ನಗದು ಕಳವು

Update: 2019-01-21 15:52 GMT

ಭಟ್ಕಳ, ಜ. 21: ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಸುಮಾರು 40 ಸಾವಿರ ರೂ. ಅಪಹರಿಸಿ ಪರಾರಿ ಯಾಗಿರುವ ಘಟನೆ ತಾಲೂಕಿನ ಪುರವರ್ಗದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಮನೆಯು ಇಸ್ಮಾಯಿಲ್ ಜಬಾಲಿ ಎಂಬುವವರಿಗೆ ಸೇರಿದ್ದಾಗಿದೆ. ಸ್ಥಳದಲ್ಲಿ ಬಾಗಿಲನ್ನು ಮುರಿಯಲು ಬಳಸಿರಬಹುದು ಎನ್ನಲಾದ ಪಿಕಾಶಿ ಪತ್ತೆಯಾಗಿದೆ. ಜ. 16ರಂದು ಅವರು ತಮ್ಮ ಪತ್ನಿಯೊಂದಿಗೆ ಇಲ್ಲಿನ ಆಳ್ವಾ ಸ್ಟ್ರೀಟ್‍ನಲ್ಲಿರುವ ಮಗಳ ಮನೆಗೆ ತೆರಳಿದ್ದರು. ಪುರವರ್ಗದಲ್ಲಿಯೇ ಇರುವ ಇಸ್ಮಾಯಿಲ್ ಸಹೋದರಿ ಶನಿವಾರ ಬೆಳಗ್ಗೆ ಮನೆಗೆ ಬಂದಿದ್ದು, ಬಾಗಿಲು ಮುರಿದಿರುವುದನ್ನು ಸಹೋದರನಿಗೆ ತಿಳಿಸಿದ್ದಾರೆ.

ಹಣ ಹಾಗೂ ಚಿನ್ನಾಭರಣಗಳಿಗಾಗಿ ಮನೆಯಲ್ಲಿರುವ ಕಪಾಟುಗಳನ್ನು ಒಡೆದು ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News