ಯಕ್ಷಗಾನ ಅಕಾಡಮಿ: ಬಹುಮಾನಕ್ಕೆ ಪುಸ್ತಕ ಆಹ್ವಾನ

Update: 2019-01-22 14:46 GMT

ಉಡುಪಿ, ಜ. 22: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು, ಬಡಾಬಡಗು, ಯಕ್ಷಗಾನ ಗೊಂಬೆಯಾಟ ಮತ್ತು ಘಟ್ಟದ ಕೋರೆ), ಮೂಡಲಪಾಯ, ಯಕ್ಷಗಾನ, ತಾಳಮದ್ದಳೆ ಯಕ್ಷಗಾನ ಇತ್ಯಾದಿ ಕಲಾ ಪ್ರಕಾರಗಳಲ್ಲಿ 2018ನೇ ಸಾಲಿನಲ್ಲಿ ಜ.1ರಿಂದ ಡಿ.31ರೊಳಗೆ ಪ್ರಕಟಿಸಿ ರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು, ಬಡಾಬಡಗು, ಯಕ್ಷಗಾನ ಗೊಂಬೆಯಾಟ ಮತ್ತು ಘಟ್ಟದ ಕೋರೆ), ಮೂಡಲಪಾಯ, ಯಕ್ಷಗಾನ, ತಾಳಮದ್ದಳೆ ಯಕ್ಷಗಾನ ಇತ್ಯಾದಿ ಕಲಾ ಪ್ರಕಾರಗಳಲ್ಲಿ 2018ನೇ ಸಾಲಿನಲ್ಲಿ ಜ.1ರಿಂದ ಡಿ.31ರೊಳಗೆ ಪ್ರಕಟಿಸಿ ರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

2018 ನೇ ಸಾಲಿನಲ್ಲಿ ಪ್ರಕಟವಾಗಿ ಅಯ್ಕೆಯಾದ ಪುಸ್ತಕಕ್ಕೆ 25,000 ರೂ. ಬಹುಮಾನ ನೀಡಲಾಗುವುದು. ಯಕ್ಷಗಾನ ಮತ್ತು ಮೂಡಲಪಾಯ ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಅಭಿನಯ ಇತ್ಯಾದಿ) ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ, ಯಕ್ಷಗಾನ ಪ್ರಸಂಗ ಇತ್ಯಾದಿ ಪ್ರಕಾರ ಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಕಳುಹಿಸಬಹುದು. ಪಠ್ಯಕ್ಕೆ ಸಿದ್ಧಪಡಿಸಿದ, ಸಂಪಾದಿತ ಅಭಿನಂದನಾ ಕೃತಿಬೇಡ. ಕೃತಿ ಪ್ರಥಮ ಮುದ್ರಣದ ಆವೃತ್ತಿಯಾಗಿರಬೇಕು.

ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಬೆಂಗಳೂರು ಇವರಿಗೆ ಜ.30ರ ಒಳಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು. ಅರ್ಜಿ ನಮೂನೆ ಯನ್ನು ಆಯಾ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಪಡೆಯಬಹುದು.

ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿಯನ್ನು ಅಕಾಡಮಿಯಿಂದ (ದೂ: 080-22113146) ಪಡೆಯಬಹುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News