ದಿ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಕೋಪರೇಟೀವ್ ಬ್ಯಾಂಕ್: ಪದಾಧಿಕಾರಿಗಳ ಆಯ್ಕೆ

Update: 2019-01-22 17:29 GMT

ಮಂಗಳೂರು, ಜ. 22: ದಿ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಕೋಪರೇಟೀವ್ ಬ್ಯಾಂಕಿನ 2019--2024ರ ಅವಧಿಯ ಆಡಳಿತ ಮಂಡಳಿಗೆ ಶ್ರೀ ಪ್ರಕಾಶ್ ನಾಯಕ್ ನೇತೃತ್ವದ ತಂಡ- ಹನ್ನೆರಡು ಸ್ಥಾನಗಳಲ್ಲಿ ಜಯಗಳಿದೆ.

ಆಡಳಿತ ಮಂಡಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಶ್ರೀ ಪ್ರಕಾಶ್ ನಾಯಕ್ ಅವರ ನೇತೃತ್ವದ ತಂಡವು ಸ್ಪರ್ಧಿಸಿದ ಹದಿಮೂರು ಸ್ಥಾನಗಳ ಪೈಕಿ ಹನ್ನೆರಡು ಸ್ಥಾನಗಳಲ್ಲಿ ಜಯಗಳಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿರುವ ಈ ಬ್ಯಾಂಕ್ ಕಳೆದ ವರ್ಷ ತನ್ನ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತ್ತು.

ಪಿ.ಕೆ. ಕೃಷ್ಣ, ಪದ್ಮನಾಭ ಜೋಗಿ, ಅಕ್ಷಯ್ ಭಂಡಾರ್ಕಾರ್, ಜ್ಯೋತಿ ಪ್ರಕಾಶ್, ಸುಜಾತಾ ಅವರು ಸಾಮಾನ್ಯ ಕ್ಷೇತ್ರದಿಂದ ಆಯ್ಕೆ ಯಾಗಿರುತ್ತಾರೆ. ಜಗದೀಶ್ ಪಿ, ಗಣೇಶ್ ರಾವ್ ಇವರು ಹಿಂದುಳಿದ ವರ್ಗದ ಕ್ಷೇತ್ರದಿಂದ, ತಿಲೋತ್ತಮ, ಶಶಿಕಲಾ ಇವರು ಮಹಿಳಾ ಕ್ಷೇತ್ರದಿಂದ,  ಶಿವಾನಂದ್ ಎಮ್ . ಇವರು ಪರಿಶಿಷ್ಟ ಜಾತಿ ಕ್ಷೇತ್ರದಿಂದ, ಬಿ.ಕೆ. ನಾಯ್ಕ್ ಇವರು ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಜಯಗಳಿಸಿದ ತಂಡದ ಸದಸ್ಯರುಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News