ಗಾಂಧೀಜಿ ಹತ್ಯೆ ಮತಾಂಧ ಕೃತ್ಯ: ನಟಿ ಸ್ವರ ಭಾಸ್ಕರ್

Update: 2019-01-30 17:29 GMT

ಹೊಸದಿಲ್ಲಿ, ಜ. 30: ಮಹಾತ್ಮಾ ಗಾಂಧಿ ಹತ್ಯೆ ಮತಾಂಧ ಕೃತ್ಯ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸ್ವರಾ ಭಾಸ್ಕರ್ ಟ್ರೋಲ್‌ಗೆ ಒಳಗಾಗುವುದು ಇದೇ ಮೊದಲಲ್ಲ.

ಹಿಂದುತ್ವದ ದ್ವೇಷದ ಚಿಂತನೆಯಲ್ಲಿ ನಂಬಿಕೆ ಇರಿಸಿಕೊಂಡಿದ್ದ ವ್ಯಕ್ತಿ 1948 ಜನವರಿ 30ರಂದು ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ. ಮತಾಂಧತೆ ಹಾಗೂ ದ್ವೇಷದಿಂದ ಕುರುಡಾಗಿ ಈ ಹತ್ಯೆ ನಡೆಸಲಾಗಿದೆ. ದೇಶಪ್ರೇಮದಿಂದ ಅಲ್ಲ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ವರ ಭಾಸ್ಕರ್ ಟ್ವೀಟ್ ಮಾಡಿದ್ದರು. ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಥುರಾಮ್ ಗೋಡ್ಸೆ ಅಪರಾಧಿ ಎಂದು ಸಾಬೀತಾಗಿತ್ತು ಹಾಗೂ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News