ಕೂಳೂರು: ನೂತನ ಸೇತುವೆ ಉದ್ಘಾಟನೆ

Update: 2019-01-30 18:10 GMT

ಮಂಗಳೂರು, ಜ.30: ಕೂಳೂರಿನ ರಾಯಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಸೇತುವೆಯನ್ನು ಮಂಗಳವಾರ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮತ್ತು ಮಾಜಿ ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಮೊಯ್ದಿನ್ ಬಾವಾ 2017ರಲ್ಲಿ ವಿಶೇಷ ಅನುದಾನ ನೀಡಿ ಈ ಸೇತುವೆಯನ್ನು ನಿರ್ಮಿಸಲು ಸಹಕರಿಸಿದ್ದೇನೆ. ಇಲ್ಲಿನ ಜನತೆ ನನ್ನ ಕೊಡುಗೆಯನ್ನು ಮರೆಯದೆ ಹೊಸ ಸೇತುವೆಯನ್ನು ಉದ್ಘಾಟಿಸುವ ಸಂದರ್ಭ ಆಮಂತ್ರಿಸಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದರು.

ಈ ಸಂದರ್ಭ ಮಾಜಿ ಮೇಯರ್ ಪುರಂದರದಾಸ ಕೂಳೂರು,ಕೆ.ಸದಾಶಿವ ಶೆಟ್ಟಿ,ಡಾಲ್ಫಿ,ಲೋಬೊ,ಶರೀಫ್,ಸದಾಶಿವ ಸುವರ್ಣ,ಐವನ್,ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News