ಉಚ್ಚಿಲ: ಹೈಮಾಸ್ಕ್ ದೀಪದ ಅಳವಡಿಕೆಗೆ ಶಾಸಕರ ಅನುದಾನ ಬಿಡುಗಡೆ

Update: 2019-01-30 18:13 GMT

ಮಂಗಳೂರು, ಜ.30: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ 2018-19ನೇ ಸಾಲಿನ ಅನುದಾನದಲ್ಲಿ ಮಂಗಳೂರು ತಾಲೂಕಿನ ಸೋಮೇಶ್ವರ ಉಚ್ಚಿಲ ಜುಮ್ಮಾ ಮಸೀದಿ ಬಳಿ ಹೈಮಾಸ್ಕ್ ದೀಪದ ಅಳವಡಿಕೆಗೆ 97,000 ರೂ., ಅನುದಾನ ಬಿಡುಗಡೆ ಮಾಡಲಾಗಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರ್‌ರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2018-19ನೇ ಸಾಲಿನ ಅನುದಾನದಲ್ಲಿ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದಿಂದ ಬೇರಿಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2,25,000 ರೂ. ಮತ್ತು ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ಕೊಲ್ಯ ಪುಳುವಾರು ರಸ್ತೆ ಅಭಿವೃದ್ಧಿಗೆ 2,25,000 ರೂ., ಬೆಳ್ಳಿಪಾಡಿ ಗ್ರಾಮದ ಕೊಡಪಟ್ಯ ಜತ್ತಿಕಲ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ 2,25,000 ರೂ., ಬನ್ನೂರು ಗ್ರಾಮದ ದಾರಂದಕುಕ್ಕು ಕಂಜೂರು ಕುಂಟ್ಯಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2,25,000 ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News