ಉಡುಪಿ ಸಬ್ ಜೈಲ್ ನಲ್ಲಿ ಖೈದಿ ಆತ್ಮಹತ್ಯೆ
Update: 2019-02-03 15:28 IST
ಉಡುಪಿ, ಫೆ. 3: ಉಡುಪಿ ಸಬ್ ಜೈಲ್ ನಲ್ಲಿ ಖೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಉಡುಪಿಯ ಕಿದಿಯೂರು ಗ್ರಾಮದ ನಿವಾಸಿ, ವಿಚಾರಣಾಧೀನ ಖೈದಿ ಅಮರ್ ನಾಥ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದ ಆರೋಪಿ ಪೊಲೀಸರು ತಿಳಿಸಿದ್ದು, ಈತನ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರಾಗೃಹದ ವೀಡಿಯೊ ಕಾನ್ಫರೆನ್ಸ್ ಹಾಲ್ ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.