ಫೆ. 5ರಂದು ಮುಲ್ಕಿ ಬಂದ್: ಜೆಡಿಎಸ್ ಬೆಂಬಲ

Update: 2019-02-03 14:59 GMT

ಮುಲ್ಕಿ, ಫೆ. 3: ಮುಲ್ಕಿ ನಾಗರಿಕ ಸಮಿತಿಯ ವತಿಯಿಂದ ಫೆ.ರಂದು ಸ್ಥಳೀಯ ವಾಹನ ಚಾಲಕರಿಗೆ ಉಚಿತ ಪಾಸ್ ನೀಡುವಂತೆ ಒತ್ತಾಯಿಸಿ ನವಯುಗ ಕಂಪೆನಿ ವಿರುದ್ಧ ನಡೆಯುವ ಹೋರಾಟಕ್ಕೆ ಜಿಲ್ಲಾ ಜೆಡಿಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಮುಲ್ಕಿ ಬಸ್ ನಿಲ್ದಾಣದಿಂದ ಟೋಲ್ ಗೇಟ್ ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಎಲ್ಲಾ ತಾಲೂಕುಗಳಿಂದ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು ಈ ಹೋರಾಟದಲ್ಲಿ ಪಕ್ಷದ ನಾಯಕರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞ, ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ಸದಾಶಿವ, ಜಿಲ್ಲಾ ಕಾರ್ಯಧ್ಯಕ್ಷರಾದ ರಾಮಗಣೇಶ್, ರಾಜ್ಯ ಕಾರ್ಯದರ್ಶಿಯಾದ ಇಕ್ಬಾಲ್  ಮುಲ್ಕಿ ಮುಂತಾದ ನಾಯಕರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News