ಹಾವು ಕಡಿತ: ಕೃಷಿಕ ಮೃತ್ಯು
Update: 2019-02-04 17:21 GMT
ಶಂಕರನಾರಾಯಣ, ಫೆ.4: ಆಜ್ರಿ ಗ್ರಾಮದ ತೆಂಕಬೈಲ್ಲು ಎಂಬಲ್ಲಿ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೃಷಿಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ರಾಮ ಕುಲಾಲ್ (65) ಎಂದು ಗುರುತಿಸಲಾಗಿದೆ. ಫೆ.1ರಂದು ಬೆಳಗ್ಗೆ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ವಿಷ ಪೂರಿತ ಹಾವು ಕಚ್ಚಿತ್ತೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಮ ಕುಲಾಲ್ ಚಿಕಿತ್ಸೆ ಫಲಕಾರಿ ಯಾಗದೆ ಫೆ.3ರಂದು ಬೆಳಗಿನ ಜಾವ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.