ವಸತಿ ನಿಲಯದ ವಿದ್ಯಾರ್ಥಿ ನಾಪತ್ತೆ
Update: 2019-02-05 16:33 GMT
ಶಿರ್ವ, ಫೆ.5: ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿಯೊರ್ವ ನಾಪತ್ತೆಯಾಗಿರುವ ಘಟನೆ ಫೆ.2ರಂದು ಮಧ್ಯಾಹ್ನ ವೇಳೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿವಾಸಿ ಮಲ್ಲಪ್ಪ ಎಂಬವರ ಮಗ ಪಂಕಜ್ (14) ಎಂಬಾತ ಮಂಚಕಲ್ಲಿನ ಕರ್ಣಾಟಕ ಬ್ಯಾಂಕಿನಿಂದ ಹಣ ತೆಗೆಯಲು ಹೋಗುವುದಾಗಿ ವಸತಿ ನಿಲಯದಿಂದ ಲಿಖಿತವಾಗಿ ಅನುಮತಿ ಪಡೆದುಕೊಂಡು ಹೋದವ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ. ಮೇಲ್ವಿ ಚಾರಕ ವಿಜಯ ಕುಮಾರ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.