ಸುರತ್ಕಲ್: ಪರೀಕ್ಷಾ ಪೂರ್ವ ಮಾರ್ಗದರ್ಶನ ಶಿಬಿರ

Update: 2019-02-09 14:58 GMT

ಸುರತ್ಕಲ್, ಫೆ.9: ದ.ಕ.ಜಿಲ್ಲಾ ಮೊಗವೀರ ಯುವವೇದಿಕೆ ವತಿಯಿಂದ ಸುರತ್ಕಲ್‌ನ ಹಿಂದೂ ವಿದ್ಯಾದಾಯಿನಿ ರಂಗ ಮಂದಿರದಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಪರಿಕ್ಷಾ ಪೂರ್ವ ಮಾರ್ಗದರ್ಶನ ಶಿಬಿರ ಜರುಗಿತು.

ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ ಕುಳಾಯಿ ಶಿಬಿರ ಉದ್ಘಾಟಿಸಿದರು. ಮೊಗವೀರ ಯುವ ವೇದಿಕೆಯ ಅಧ್ಯಕ್ಷ ಜಗದೀಶ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಹರಿಪ್ರಸಾದ್, ವಿದ್ಯಾದಾಯಿನಿ ಪ್ರೌಢಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಮಾತನಾಡಿದರು.

ಈ ಸಂದರ್ಭ ಅಂತಾರಾಷ್ಟ್ರೀಯ ಶಿಕ್ಷಣ ತರಬೇತುದಾರ ರಾಜೇಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಬಾಲಚಂದ್ರ ಕೆ., ಜೆಸಿಐ ಅಧ್ಯಕ್ಷ ವಿಶಾಲ್ ರೈ, ಯುವ ವೇದಿಕೆ ಉಪಾಧ್ಯಕ್ಷರಾದ ರವಿ ಶ್ರೀಯಾನ್, ಶ್ರೀಕಾಂತ್ ಗುಡ್ಡೆಕೊಪ್ಲ, ಹರೀಶ್ ಬಂಗೇರ ಬೈಕಂಪಾಡಿ, ಸುಧೀರ್ ಶ್ರೀಯಾನ್ ಗುಡ್ಡೆಕೊಪ್ಲ, ಯಶವಂತ ದೊಡ್ಡಕೊಪ್ಲ, ರೋಹಿದಾಸ್ ಕುಳಾಯಿ, ರಾಜೇಶ್ ಗುಡ್ಡೆಕೊಪ್ಲ, ತುಷಾರ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಲೀಲಾಧರ ತಣ್ಣೀರುಬಾವಿ ಕಾರ್ಯಕ್ರಮ ನಿರೂಪಿಸಿದರು. ಸಂಜಯ್ ಬೆಂಗ್ರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News