‘ಬಾಬರಿ ಮಸೀದಿ ಮರಳಿ ಪಡೆಯೊಣ’ ಎಕ್ಸ್ಪೋ- ವಿಡಿಯೋ ಪ್ರದರ್ಶನ
Update: 2019-02-09 21:25 IST
ಉಡುಪಿ, ಫೆ. 9: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಬಾಬರಿ ಮಸೀದಿ ಮರಳಿ ಪಡೆಯೊಣ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಎಕ್ಸ್ಪೋ ಹಾಗೂ ವಿಡಿಯೋ ಪ್ರದರ್ಶನ ಕಾರ್ಯಕ್ರಮವು ಆದಿಉಡುಪಿ ಮಸೀದಿ ವಠಾರದಲ್ಲಿ ಶುಕ್ರವಾರ ಜರಗಿತು.
ಮಸೀದಿಯ ಇಮಾಮ್ ವೌಲಾನ ತೌಕಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪಿಎಫ್ಐ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್, ಕಾರ್ಯದರ್ಶಿ ಫಯಾಝ್ ಅಹಮದ್, ಜಿಲ್ಲಾ ಸಮಿತಿ ಸದಸ್ಯರಾದ ಫಝಿಲ್ ಅಹಮದ್ ಆದಿಉಡುಪಿ, ಬಶೀರ್ ಅಂಬಾಗಿಲು, ಜಿ.ಬಿಲಾಲ್, ಅಶ್ರಫ್ ಆದಿಉಡುಪಿ, ಶುಕೂರ್ ಮಲ್ಪೆ, ಆಫೀಫ್ ಮಲ್ಪೆ, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಇಲಿಯಾಸ್ ಸಾಸ್ತಾನ, ಇಸ್ಮಾಯಿಲ್ ಕಟಪಾಡಿ, ನಝೀರ್ ಉಡುಪಿ ಉಪಸ್ಥಿತರಿದ್ದರು. ಹಫಿೀಝ್ ಅಬ್ದುಲ್ಲಾ ಕಿರಾತ್ ಪಠಿಸಿದರು.