ಬ್ಯಾರಿ ಮೇಳ: ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ

Update: 2019-02-11 15:08 GMT

ಮಂಗಳೂರು, ಫೆ. 11: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಪುರಭವನದಲ್ಲಿ ನಡೆದ ಬ್ಯಾರಿ ಮೇಳದಲ್ಲಿ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ಸಲುವಾಗಿ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’  ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಬಿಸಿಸಿಐಯ ಎರಡು ಕಾರ್ಯಕ್ರಮಗಳಲ್ಲಿ ನಾನು ಈ ಹಿಂದೆ ಭಾಗವಹಿಸಿದ್ದೆ. ಮತ್ತೆ ಮೂರನೇ ಬಾರಿ ಭಾಗವಹಿಸುವ ಅವಕಾಶ ಸಿಕ್ಕಿದೆ. ತುಂಬಾ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಿಸಿಸಿಐ ಮುನ್ನಡೆಯುತ್ತಿದೆ. ಬ್ಯಾರಿ ಮೇಳ ತುಂಬಾ ಯಶಸ್ವಿಯಾಗಿದೆ. ನಾವೆಲ್ಲಾ ಸೇರಿ ಸುಂದರ ಮಂಗಳೂರನ್ನು ನಿರ್ಮಿಸೋಣ ಎಂದರು.

ಬ್ಯಾರೀಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಥಮ 5000 ರೂ., ದ್ವಿತೀಯ 3000 ಮತ್ತು ತೃತೀಯ 2000 ದೊಂದಿಗೆ ಟ್ರೋಫಿ ಮತ್ತು ಸರ್ಟಿಫಿಕೇಟುಗಳನ್ನು ನೀಡಿ ಗೌರವಿಸಲಾಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ ಹಬೀಬ್ ರಹ್ಮಾನ್, ಬಿಸಿಸಿಐಯ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹ್ಮದ್, ಉಪಾಧ್ಯಕ್ಷ ಝಕರಿಯ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಕಾರ್ಯದರ್ಶಿ ನಿಸಾರ್ ಮುಹಮ್ಮದ್, ಬಿಸಿಸಿಐ ಯುಎಇ ಚಾಪ್ಟರ್ ಅಧ್ಯಕ್ಷ ಎಸ್.ಎಂ ಬಶೀರ್, ಉಪಾಧ್ಯಕ್ಷ ಹಿದಾಯತುಲ್ಲಾ ಅಡ್ಡೂರು, ಹಾಸನ ಚಾಪ್ಟರ್ ಅಧ್ಯಕ್ಷ ಝಾಕಿರ್ ಯಾದ್‍ಗಾರ್, ಉಪಾಧ್ಯಕ್ಷ ಮುಷ್ತಾಖ್ ಅಲ್ ಆರಿಫ್, ಉದ್ಯಮಿ ಮನ್ಸೂರ್ ಬಹರೈನ್, ಬಿಸಿಸಿಐಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಿಯಾಝ್ ಬಾವಾ, ಮುಮ್ತಾಝ್ ಅಲಿ ಬಿ.ಎಂ, ಎ.ಕೆ ನಿಯಾಝ್, ಗೋಳ್ತಮಜಲು ಅಬ್ದುಲ್ ರಝಾಕ್, ಎ.ಎಚ್ ಮೆಹಮೂದ್, ಮುಹಮ್ಮದ್ ಶರೀಫ್ ಎಂ, ಮುಹಮ್ಮದ್ ಹಾರಿಸ್,  ಅಸ್ಗರ್ ಹಾಜಿ, ಶೌಕತ್ ಶೌರಿ, ಅಬ್ದುಲ್ಲ ಮೊಯ್ದಿನ್ ಮೋನು, ಮುಹಮ್ಮದ್ ಅಲಿ ಉಚ್ಚಿಲ್, ಆಸಿಫ್ ಸೂಫಿ ಖಾನ್, ಅಬ್ದುಲ್ ನಾಸಿರ್, ಕಾಸಿಂ ಅಹ್ಮದ್ ಎಚ್.ಕೆ, ಬಿ.ಎ ನಝೀರ್, ಆಸಿಫ್ ಅಮ್ಯಾಕೊ ಮೊದಲಾದವರು ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಎನ್‍ಎಂಪಿಟಿ ಯ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರುಬಾವಿ, ನ್ಯಾಷನಲ್ ಟ್ಯುಟೋರಿಯಲ್ಸ್‍ನ ಪ್ರಾಂಶುಪಾಲ ಖಾಲಿದ್ ಉಜಿರೆ ಹಾಗೂ ಕಲಾಕಾರ್ ಕ್ರಿಯೇಷನ್ಸ್‍ನ ರಿಯಾಝ್ ಅಶ್ರಫ್ ಕಲಾಕಾರ್ ಸಹಕರಿಸಿದ್ದರು.

ಟಿ.ಆರ್.ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ಸಂಯೋಜಿಸಿದರು. 

ಬ್ಯಾರೀಸ್ ಗಾಟ್ ಟ್ಯಾಲೆಂಟ್ ವಿಜೇತರ ವಿವರ

ಸೀನಿಯರ್ ವಿಭಾಗ: ಪ್ರಥಮ: ಹಲೀಮಾ ಸುಮಾ ಶಾಹ್, ಆತೂರು, ದ್ವಿತೀಯ:  ಅಬ್ದುಲ್ ಖಾದರ್, ಕನ್ನಂಗಾರ್, ತೃತೀಯ: ಆಸಿಫ್ ಕಿನ್ಯ ಮತ್ತು ಸವಾದ್ ನಂದಾವರ, ರಹಿಮಾನ್ ಕೊಣಾಜೆ.

ಜೂನಿಯರ್ ವಿಭಾಗ: ಪ್ರಥಮ: ಚಾಂದ್ ಶರೀಫ್ ಪುತ್ತೂರು, ದ್ವಿತೀಯ: ಮುಹಮ್ಮದ್ ಫಕ್ರುದ್ದೀನ್ ಬಂದರ್, ತೃತೀಯ: ದಿಯಾ ಮರ್ಯಮ್ ಸುಳ್ಯ, ರೋಷನ್ ಶರೀಫ್ ಪುತ್ತೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News