ಅಂದರ್ಬಾಹರ್: 6 ಮಂದಿ ಸೆರೆ
Update: 2019-02-11 16:03 GMT
ಕುಂದಾಪುರ, ಫೆ.11: ವಡೇರಹೋಬಳಿ ಗ್ರಾಮದ ಹುಂಚಾರಬೆಟ್ಟು ಬೈಲ ಚಿಕ್ಕು ದೇವಸ್ಥಾನದ ಬಳಿ ಫೆ.10ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಹುಂಚಾರಬೆಟ್ಟು ನಿವಾಸಿಗಳಾದ ಸುದೀಪ್(28), ಮಹೇಶ(24), ಅವಿನಾಶ್(22), ನಿತೇಶ್(25), ನಾಗರಾಜ(22), ಮಂಜುನಾಥ(24) ಬಂಧಿತ ಆರೋಪಿಗಳು. ಇವರಿಂದ 550ರೂ. ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.