ತಂಡದಿಂದ ಬಾರ್‌ನಲ್ಲಿ ದಾಂಧಲೆ

Update: 2019-02-11 16:05 GMT

ಶಿರ್ವ, ಫೆ.11: ಕಟ್ಟಿಂಗೇರಿಯಲ್ಲಿರುವ ನಿಂಜೂರಿನ ಸಂದೇಶ ಶೆಟ್ಟಿ (32) ಎಂಬವರ ಎಸ್.ಎಸ್. ಬಾರ್‌ಗೆ ಫೆ.10ರಂದು ರಾತ್ರಿ ವೇಳೆ ನುಗ್ಗಿದ ತಂಡ ದಾಂಧಲೆ ನಡೆಸಿ ಸುಮಾರು ಐದು ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಹಾನಿಗೈದಿದೆ ಎಂದು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಕ್ ಹೆಗ್ಡೆ, ಮಧುಕರ ಶೆಟ್ಟಿ, ಪ್ರಶಾಂತ ಶೆಟ್ಟಿ, ಅಕ್ಷತ್ ಶೆಟ್ಟಿ, ಮಂಗಳೂರಿನ ನಿಶಿತ್ ಪೂಜಾರಿ ಮತ್ತು ಪ್ರಶಾಂತ ಶೆಟ್ಟಿ ಹಾಗೂ ಇತರರು ಎರಿಟಿಗಾ ಕಾರು ಹಾಗೂ ಬೈಕಿನಲ್ಲಿ ಬಂದು ಸಂದೇಶ್ ಶೆಟ್ಟಿಗೆ ಹಲ್ಲೆ ನಡೆಸಿ, ಬಾರಿನಲ್ಲಿದ್ದ ಶರಾಬು ಬಾಟಲಿಗಳನ್ನು ಹುಡಿ ಮಾಡಿ, ಕೌಂಟರ್, ಚಯರ್, ಟೇಬಲ್ಗಳನ್ನು ಹಾನಿ ಮಾಡಿದರು. ಅಲ್ಲದೆ ಬಾರಿನ ಹೊರಗಡೆ ನಿಲ್ಲಿಸಿದ್ದ ಕಾರನ್ನು ಜಖಂಗೊಳಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News