ಹಳೆಯಂಗಡಿ ರಾಜ್ಯ ಮಟ್ಟದ ದಫ್ ಸ್ಪರ್ಧೆ: ಪರ್ಲಡ್ಕ ಚಾಂಪಿಯನ್

Update: 2019-02-11 16:13 GMT

ಮಂಗಳೂರು, ಫೆ. 11: ಹಳೆಯಂಗಡಿ ಕದಿಕೆ ಉರೂಸ್‌ ಹಳೆಯಂಗಡಿ ಕದಿಕೆಯಲ್ಲಿ ನೂರಾರು ವರ್ಷಗಳಿಂದ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ (ಖ.ಸಿ) ಅವರ ಉರೂಸ್ ಸಮಾರಂಭದ ಪ್ರಯುಕ್ತ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟ ದರ್ಗಾದ ವಠಾರದಲ್ಲಿ ನಡೆಯಿತು.

ಪ್ರಥಮ ಸ್ಥಾನವನ್ನು ಹಯಾತುಲ್ ಇಸ್ಲಾಮ್ ದಫ್ ಸಮಿತಿ ಪರ್ಲಡ್ಕ ಪುತ್ತೂರು, ದ್ವಿತೀಯ ಬಹುಮಾನವನ್ನು ರಿಫಾಯಿಯಾ ದಫ್ ಅಸೋಸಿಯೇಶನ್ ಕೈಕಂಬ ಬಿಸಿರೋಡ್ ತೃತೀಯ ಸ್ಥಾನವನ್ನು ಸಿರಾಜುಲ್ ಹುದಾ ದಫ್ ಸಮಿತಿ ಮಜೂರು, ಚತುರ್ಥ ಸ್ಥಾನವನ್ನು ಕಲಂದರ್ ಷಾ ದಫ್ ಸಮಿತಿ ಮಣಿಪುರ ಪಡೆದುಕೊಂಡಿತು.

ಸ್ಪರ್ಧಾ ಕೂಟದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುಲ್ ರಹಿಮಾನ್ ಫೈಝಿ ಟ್ರೋಫಿ ಮತ್ತು ನಗದು ಪುರಸ್ಕಾರವನ್ನು ವಿತರಿಸಿದರು.

ಈ ಸಂದರ್ಭ ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಸಾಗ್, ಅಬ್ದುಲ್ ರಝಾಕ್ ಕಜಕತೋಟ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಸ್ಪರ್ಧಾ ಕೂಟದ ಉಸ್ತುವಾರಿ ಫಾರೂಕ್ ಸಾಗ್, ಸಾಹುಲ್ ಹಮೀದ್ ಕದಿಕೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News