ಫೆ.15ರಂದು ಬಾನುಲಿ ರೈತ ದಿನಾಚರಣೆ
Update: 2019-02-12 15:11 GMT
ಶಿರ್ವ, ಫೆ.12: ಪ್ರಸಾರ ಭಾರತಿ, ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ಮಂಗಳೂರು ಹಾಗೂ ರೋಟರಿ ಕ್ಲಬ್ ಶಿರ್ವ, ಉಡುಪಿ ಜಿಲ್ಲಾ ಕೃಷಿಕ ಸಂಘಗಳ ಸಹಭಾಗಿತ್ವದಲ್ಲಿ ಬಾನುಲಿ ರೈತ ದಿನಾಚರಣೆಯನ್ನು ಫೆ.15 ರಂದು ಪೂರ್ವಾಹ್ನ 9:30ಕ್ಕೆ ಬಂಟಕಲ್ಲು ಶಿವರ್ ರೋಟರಿ ಸಭಾಂಗಣದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಚ್. ಕೆಂಪೇಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಕೆ.ಶೆಟ್ಟಿ ವಹಿಸಲಿರುವರು. ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ದಿಕ್ಸೂಚಿ ಬಾಷಣ ಮಾಡಲಿರು ವರು ಎಂದು ಸ್ಥಳೀಯ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ನಾಯಕ್ ಶಿರ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.