×
Ad

ಮೀಸಲಾತಿ ಆಗ್ರಹಿಸಿ ಗುಜ್ಜರರ ಪ್ರತಿಭಟನೆ: ಅನಾರೋಗ್ಯಕ್ಕೆ ತುತ್ತಾದ ಗುಜ್ಜರರ ನಾಯಕ

Update: 2019-02-13 21:09 IST

ಜೈಪುರ, ಫೆ. 13: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಗುಜ್ಜರರಿಗೆ ಶೇ. 5 ಮೀಸಲಾತಿ ನೀಡುವಂತೆ ಆಗ್ರಹಿಸಿ ಸವಾಯಿ ಮಧೋಪುರ ಜಿಲ್ಲೆಯಲ್ಲಿ ತನ್ನ ಬೆಂಬಲಿಗರೊಂದಿಗೆ ಕಳೆದ ಶುಕ್ರವಾರದಿಂದ ಧರಣಿ ನಡೆಸುತ್ತಿರುವ ಗುಜ್ಜರರ ನಾಯಕ ಕಿರೋರಿ ಸಿಂಗ್ ಬೈನ್ಸ್‌ಲಾ ಬುಧವಾರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಅವರಿಗೆ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ ಧರಣಿ ನಡೆಯುತ್ತಿದ್ದ ಮಲಾರ್ನ ದೂಂಗಾರ್‌ಗೆ ಆಗಮಿಸಿದ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿದೆ. ಈ ನಡುವೆ, ಧರಣಿ ನಡೆದ ಸ್ಥಳದಲ್ಲಿ ಐಎಎಸ್ ಅಧಿಕಾರಿ ನೀರಜ್ ಕೆ. ಪವನ್ ಬೈನ್ಸ್‌ ಲಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಹಾಗೂ ಗುಜ್ಜರರು, ಇತರ ಜಾತಿಗಳಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸರಕಾರ ಮಂಡಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಗುಜ್ಜರರು ಪ್ರತಿಭಟನೆ ನಿಲ್ಲಿಸುವ ಯಾವುದೇ ಸೂಚನೆ ಕಾಣುತ್ತಿಲ್ಲ. ಗುಜ್ಜರ ಪ್ರತಿಭಟನಕಾರರು ಬುಧವಾರ ಕೂಡ ಪ್ರತಿಭಟನೆ ಮುಂದುವರಿಸಿದ್ದು, ದಿಲ್ಲಿ-ಮುಂಬೈ ರೈಲು ಸಂಚಾರ ತಡೆ ನಡೆಸಿದರು. ಅಲ್ಲದೆ, ರಾಜಸ್ಥಾನದ ಹಲವು ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಸಂಚಾರಕ್ಕೆ ತಡೆ ಒಡ್ಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News