ಫೆ.19 ರಂದು ಸೂರಿಕುಮೇರಿನಲ್ಲಿ ರಕ್ತದಾನ ಶಿಬಿರ
ಮಾಣಿ,ಫೆ.13: ಬದ್ರಿಯಾ ಫೌಂಡೇಶನ್ ಸೂರಿಕುಮೇರು ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಫೆ.19 ಮಂಗಳವಾರ ಸೂರಿಕುಮೇರು ಜಂಕ್ಷನ್ ಬಳಿ ನಡೆಯಲಿದೆ.
ಅಬ್ದುಲ್ ರಶೀದ್ ನೀರಪಾದೆ ಅಧ್ಯಕ್ಷತೆ ವಹಿಸಲಿದ್ದು, ಜಮಾಅತ್ ಖತೀಬ್ ಡಿಎಸ್ ಅಬ್ದುರ್ರಹ್ಮಾನ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಶಾಸಕ ರಾಜೇಶ್ ನಾಯಕ್, ಬರಿಮಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಕೇಶ್ ಪ್ರಭು, ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಇದರ ಧರ್ಮಗುರುಗಳಾದ ಮಾ|ಬಾ|ಗ್ರೇಗರಿ ಪಿರೇರಾ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಎಸ್ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿಡಿ ನಾಗರಾಜ್, ಹಾಜಿ ಯೂಸುಫ್ ಸೂರಿಕುಮೇರು, ರಫೀಕ್ ಹಾಜಿ ಕೊಡಾಜೆ, ಉದ್ಯಮಿ ಉಲ್ಲಾಸ್ ರೈ ಸೂರಿಕುಮೇರು, ಸುದೀಪ್ ಶೆಟ್ಟಿ ಮಾಣಿ, ಮುಹಮ್ಮದ್ ಬರಿಮಾರ್ ಉದ್ಯಮಿ, ಉದ್ಯಮಿ ಸಿದ್ದೀಕ್ ಜಿಎಸ್ ಕಲ್ಲಡ್ಕ, ಉದ್ಯಮಿ ಸುಧೀರ್ ಶಂಭುಗ ಮಂಗಳೂರು ಹಾಗೂ ಇನ್ನಿತರ ಹಲವಾರು ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.