ಕೂಳೂರು: ‘ಗಡಿಯಾರ್’ ರೆಸ್ಟೋರೆಂಟ್ ಶುಭಾರಂಭ

Update: 2019-02-14 17:34 GMT

ಮಂಗಳೂರು, ಫೆ.14: ರಾ.ಹೆ. 66ರ ಕೂಳೂರು ಜಂಕ್ಷನ್‌ನಲ್ಲಿರುವ ವಾಣಿ ವಿಲಾಸ್ ಕಟ್ಟಡದಲ್ಲಿ ‘ಗಡಿಯಾರ್-ಮಲ್ಟಿ ಕುಸಿನ್ ಆ್ಯಂಡ್ ಸೀಫುಡ್’ ರೆಸ್ಟೋರೆಂಟ್ ಗುರುವಾರ ಶುಭಾರಂಭಗೊಂಡಿತು.

‘ಗಡಿಯಾರ್’ ರೆಸ್ಟೋರೆಂಟ್‌ನ ಪಾಲುದಾರ ಇಬ್ರಾಹೀಂ ಗಡಿಯಾರ್ ಮತ್ತು ಇನ್ನೋರ್ವ ಪಾಲುದಾರ ಗಣೇಶ್ ಶೆಟ್ಟಿಯ ಪುತ್ರಿಯರಾದ ಶಿವಾಣಿ ಶೆಟ್ಟಿ ಮತ್ತು ಶ್ರವಾಣಿ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಪಾಲುದಾರ ಗಣೇಶ್ ಶೆಟ್ಟಿಯ ಪತ್ನಿ ಬಬಿತಾ ಶೆಟ್ಟಿ, ಗುರುಚಂದ್ರ ಹೆಗ್ಡೆ ಗಂಗಾರಿ, ಮನೋಹರ ಶೆಟ್ಟಿ, ಡಾ.ಎಂ.ಎಸ್. ಪುತ್ರನ್, ಪ್ರಮೋದ್ ಭಟ್, ಹೈದರ್ ಪರ್ತಿಪ್ಪಾಡಿ, ಪ್ರಕಾಶ್, ಪ್ರವೀಣ್, ಕರುಣಾಕರ ಗಾಂಭೀರ್, ಜಯಪ್ರಕಾಶ್ ಶೆಟ್ಟಿ, ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

‘ಗಡಿಯಾರ್’ ರೆಸ್ಟೋರೆಂಟ್‌ನಲ್ಲಿ ವಿವಿಧ ಬಗೆಯ ನಾರ್ತ್ ಮತ್ತು ಸೌತ್ ಇಂಡಿಯನ್ ಆಹಾರ-ಖಾದ್ಯಗಳು, ತಿಂಡಿ ತಿನಿಸುಗಳು, ಚೈನೀಸ್ ಮತ್ತು ಕರಾವಳಿಯ ವಿಶೇಷ ಹಾಗೂ ಸ್ವಾದಿಷ್ಟ ಮೀನಿನ ಖಾದ್ಯಗಳು ಮಿತದರದಲ್ಲಿ ಲಭ್ಯವಿದೆ. ಜೊತೆಗೆ ಶುಭ-ಸಮಾರಂಭಗಳಿಗೆ ವಿಶಾಲವಾದ ಹಾಲ್ ಮತ್ತು ಗ್ರಾಹಕರ ಸುಮಾರು 50ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲದೆ 5 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಡೋರ್ ಡೆಲಿವರಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News