ಯೋಧರ ಹತ್ಯೆ: ಉಗ್ರರ ಅಮಾನವೀಯ ಕೃತ್ಯ- ಸಚಿವ ಯು.ಟಿ ಖಾದರ್

Update: 2019-02-15 14:36 GMT

ಮಂಗಳೂರು, ಫೆ. 15: ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.

ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ. ಈ ಉಗ್ರರ ಕೃತ್ಯಕ್ಕೆ ತೀರುಗೇಟು ನೀಡಲೇಬೇಕಾಗಿದೆ.  ಕೇಂದ್ರ ಸರಕಾರದ ಜೊತೆ ಈ ಸಂದರ್ಭದಲ್ಲಿ ನಾವಿದ್ದೇವೆ. ಹುತಾತ್ಮ  ಸೈನಿಕರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News