ಕೂಳೂರು: ‘ಗಡಿಯಾರ್’ ರೆಸ್ಟೋರೆಂಟ್ ಶುಭಾರಂಭ

Update: 2019-02-15 16:27 GMT

ಮಂಗಳೂರು, ಫೆ.15: ರಾ.ಹೆ. 66ರ ಕೂಳೂರು ಜಂಕ್ಷನ್‌ನಲ್ಲಿರುವ ವಾಣಿ ವಿಲಾಸ್ ಕಟ್ಟಡದಲ್ಲಿ ‘ಗಡಿಯಾರ್-ಮಲ್ಟಿ ಕಸಿನ್ ಆ್ಯಂಡ್ ಸೀಫುಡ್’ ರೆಸ್ಟೋರೆಂಟ್ ಗುರುವಾರ ಶುಭಾರಂಭಗೊಂಡಿತು.

‘ಗಡಿಯಾರ್’ ರೆಸ್ಟೋರೆಂಟ್‌ನ ಮ್ಯಾನೇಜಿಂಗ್ ಡೈರಕ್ಟರ್ ಇಬ್ರಾಹೀಂ ಗಡಿಯಾರ್ ಮತ್ತು ಮ್ಯಾನೇಜಿಂಗ್ ಪಾಟ್ನರ್ ಗಣೇಶ್ ಶೆಟ್ಟಿ ಅವರ ಪುತ್ರಿ ಶ್ರವಾಣಿ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಊರಿನ ಗಣ್ಯರು ಉಪಸ್ಥಿತರಿದ್ದರು.

‘ಗಡಿಯಾರ್’ ರೆಸ್ಟೋರೆಂಟ್‌ನಲ್ಲಿ ವಿವಿಧ ಬಗೆಯ ನಾರ್ತ್ ಮತ್ತು ಸೌತ್ ಇಂಡಿಯನ್ ಆಹಾರ-ಖಾದ್ಯಗಳು, ತಿಂಡಿ ತಿನಿಸುಗಳು, ಚೈನೀಸ್ ಮತ್ತು ಕರಾವಳಿಯ ವಿಶೇಷ ಹಾಗೂ ಸ್ವಾದಿಷ್ಟ ಮೀನಿನ ಖಾದ್ಯಗಳು ಮಿತದರದಲ್ಲಿ ಲಭ್ಯವಿದೆ. ಜೊತೆಗೆ ಶುಭ-ಸಮಾರಂಭಗಳಿಗೆ ವಿಶಾಲವಾದ ಹಾಲ್ ಮತ್ತು ಗ್ರಾಹಕರ ಸುಮಾರು 50ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲದೆ 5 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಡೋರ್ ಡೆಲಿವರಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News