ಹುತಾತ್ಮ ಸೈನಿಕರ ಬಗ್ಗೆ ವಿಕೃತಿಯ ಟ್ವೀಟ್: ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಎಎಂಯು

Update: 2019-02-15 16:42 GMT

ಹೊಸದಿಲ್ಲಿ, ಫೆ.15: ಪುಲ್ವಾಮದಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುರಿತಂತೆ ವಿಕೃತಿ ಮೆರೆದ ವಿದ್ಯಾರ್ಥಿಯನ್ನು ಆಲಿಘರ್ ಮುಸ್ಲಿಂ ವಿವಿ ಅಮಾನತುಗೊಳಿಸಿದೆ.

ಪುಲ್ವಾಮಾ ದಾಳಿಯ ಬಗ್ಗೆ ಕಮೆಂಟ್ ಮಾಡಿದ್ದ ಆಲಿಘರ್ ಮುಸ್ಲಿಂ ವಿವಿ ವಿದ್ಯಾರ್ಥಿ ಬಾಸಿಮ್ ಹಿಲಾಲ್ ಎಂಬಾತ, “ಹೌ ಇಸ್ ದ ಜೈಶ್? ಗ್ರೇಟ್ ಸರ್ #ಕಾಶ್ಮೀರ್” ಎಂದು ಟ್ವೀಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿವಿಯಿಂದ ಅಮಾನತುಗೊಳಿಸಲಾಗಿದೆ.

ಇನ್ನೊಂದು ಘಟನೆಯಲ್ಲಿ ಪುಲ್ವಾಮ ದಾಳಿಯ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಉಪ ಸಂಪಾದಕರೊಬ್ಬರನ್ನು ಎನ್ ಡಿಟಿವಿ ಅಮಾನತುಗೊಳಿಸಿದೆ. ಎನ್ ಡಿಟಿವಿಯ ನಿಧಿ ಸೇಥಿ ಎಂಬವರು ಈ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News