ಕರಾಚಿ ಕಲಾ ಉತ್ಸವದಲ್ಲಿ ಪಾಲ್ಗೊಳ್ಳದಿರಲು ಶಬನಾ ಅಝ್ಮಿ, ಜಾವೇದ್ ಅಖ್ತರ್ ನಿರ್ಧಾರ

Update: 2019-02-15 17:00 GMT

ಮುಂಬೈ, ಫೆ. 15: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ನಡೆಯಲಿರುವ ಕಲಾ ಉತ್ಸವದಲ್ಲಿ ನಟಿ ಶಬನಾ ಅಝ್ಮಿ ಹಾಗೂ ಅವರ ಪತಿ ಜಾವೇದ್ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಕರಾಚಿಯಲ್ಲಿ ಶಬನಾ ಅಝ್ಮಿ ಅವರ ತಂದೆ ಕೈಫಿ ಅಝ್ಮಿ ಅವರ 100ನೇ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರಾಚಿ ಆರ್ಟ್ಸ್ ಕೌನ್ಸಿನಲ್ ದಂಪತಿಗೆ ಆಹ್ವಾನ ನೀಡಿದೆ.

‘‘ನಾನು ಹಾಗೂ ನನ್ನ ಪತಿ ಜಾವೇದ್ ಅಖ್ತರ್ ಕರಾಚಿಯಲ್ಲಿ ನಡೆಯಲಿರುವ ಕೈಫಿ ಅಝ್ಮಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ.’’ ಎಂದು ಶಬನಾ ಅಝ್ಮಿ ಹೇಳಿದ್ದಾರೆ. ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಝ್ಮಿ, ನಾವು ಹುತಾತ್ಮರಾದ ಯೋಧರ ಕುಟುಂಬದವರೊಂದಿಗೆ ಇದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News