ಬಜಾಲ್: ಟೀಮ್ ಇಂಡಿಯಾದಿಂದ ಶ್ರದ್ಧಾಂಜಲಿ ಸಭೆ

Update: 2019-02-15 17:19 GMT

ಮಂಗಳೂರು, ಫೆ.15: ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಬಲಿದಾನಗೈದ ವೀರಯೋಧರಿಗೆ ಟೀಮ್ ಇಂಡಿಯಾ ಬಜಾಲ್ ಕಾರ್ಯಕರ್ತರಿಂದ ಪಕ್ಕಲಡ್ಕದಲ್ಲಿ ಗೌರವಾರ್ಥ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಮಾತನಾಡಿದರು. ಈ ವೇಳೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಮುಖಂಡರಾದ ಸುರೇಶ್ ಬಜಾಲ್, ಪ್ರಕಾಶ್ ಶೆಟ್ಟಿ, ನಾಗರಾಜ್ ಬಜಾಲ್, ಅಶೋಕ್ ಸಾಲ್ಯಾನ್, ನೂರುದ್ದಿನ್, ಹರಿಹರನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News