ಕಾಂತಾವರದಲ್ಲಿ ಚಿರತೆ ದಾಳಿ: ಇಬ್ಬರಿಗೆ ಗಾಯ
Update: 2019-02-15 18:19 GMT
ಮೂಡುಬಿದಿರೆ, ಫೆ. 15: ಕಾಂತಾವಾರ ಪರಿಸರದಲ್ಲಿ ಕಳೆದ ಹಲವು ಸಮಯದಿಂದ ಓಡಾಡಿಕೊಂಡಿದ್ದ ಚಿರತೆಯೊಂದು ದಾಳಿ ನಡೆಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದ್ದು, ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಾಂತಾವರ ನಿವಾಸಿಗಳಾದ ಸುಂದರ ಪೂಜಾರಿ ಮತ್ತು ಮೀನ ಚಿರತೆ ದಾಳಿಗೆ ಒಳಗಾದವರು. ಅಂಬರೀಶ ಗುಹೆಯ ಬಳಿ ನಡೆಸಿದೆ. ಶುಕ್ರವಾರ ಬೆಳಿಗ್ಗೆ ಚಿರತೆ ದಾಳಿ ನಡೆಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ತಕ್ಷಣ ದೌಡಾಯಿಸಿ ಬಂದೂಕಿನ ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.