ಮೂಡುಬಿದಿರೆ: ಭಿನ್ನ ಸಾಮರ್ಥ್ಯದ ಮಕ್ಕಳ ಜತೆ ಸೈನಿಕರಿಗೆ ಸಲಾಂ

Update: 2019-02-16 14:52 GMT

ಮೂಡುಬಿದಿರೆ, ಫೆ. 16: ದೇಶಕ್ಕಾಗಿ ಇತ್ತೀಚಿಗೆ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸುವ ಕಾರ್ಯವನ್ನು ಯುವ ಮಿಲನ್ ವಿಶಿಷ್ಠವಾಗಿ ನಡೆಸಿತು.

ಸ್ಥಳೀಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಕೇಂದ್ರದ  ಮಕ್ಕಳ ಜತೆಗೂಡಿ ಸಮಾಜ ಮಂದಿರದಲ್ಲಿ ಶನಿವಾರದಂದು  ಹುತಾತ್ಮ ಸೈನಿಕರಿಗಾಗಿ ಮೌನ ಪ್ರಾರ್ಥನೆ, ಸೈನಿಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ, ಮೊಂಬತ್ತಿ ಬೆಳಗಿ ಸಂತಾಪ ವ್ಯಕ್ತಪಡಿಸಲಾಯಿತು. ಇನ್ನೂ ಹೆಚ್ಚಿನ ಸೈನಿಕರು ದೇಶ ಸೇವೆಗಾಗಿ ಹುಟ್ಟಿ ಬರಲಿ ಎಂದು ಪ್ರಾರ್ಥಿಸಲಾಯಿತು.

ದೇಶ ಸೇವೆಯಲ್ಲಿ ಸೇನೆಯ ಕೊಡುಗೆ, ಅವರ ಬಲಿದಾನ ಬೆಲೆಕಟ್ಟಲಾಗದ್ದು ಎಂದು ಯುವ ಮಿಲನ್ ಅಧ್ಯಕ್ಷ ಶ್ರೀನಿತ್ ಶೆಟ್ಟಿಮಾರ್ನಾಡ್ ಹೇಳಿದರು.  ಉಪಾಧ್ಯಕ್ಷೆ ರೂಪ ಬಲ್ಲಾಳ್, ಸ್ಫೂರ್ತಿ ಶಾಲೆಯ ಅಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್ ಸಹಿತ ಶಿಕ್ಷಕರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News