ಕುಂದಾಪುರದಲ್ಲಿ ‘ಹರ್ಷ’ ಬೃಹತ್ ಮಳಿಗೆ ಶುಭಾರಂಭ

Update: 2019-02-16 16:13 GMT

ಕುಂದಾಪುರ, ಫೆ.16: ಕುಂದಾಪುರದ ಮುಖ್ಯರಸ್ತೆಯಲ್ಲಿ ಶುಭಾರಂಭಗೊಂಡ ಪ್ರತಿಷ್ಠಿತ ಗೃಹೋಪಕರಣಗಳ ಮಳಿಗೆಯಾದ ‘ಹರ್ಷ’ ಇದರ ನೂತನ ಬೃಹತ್ ಮಳಿಗೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣ ಮಟ್ಟದ ಗೃಹೋಪಕರಣಗಳನ್ನು ನೀಡುವ ಮೂಲಕ ಹರ್ಷ ಸಂಸ್ಥೆಯು ಜನರಿಗೆ ಬಹಳ ಹತ್ತಿರವಾಗಿದೆ. ಇದನ್ನು ಉದ್ಯಮ ಅಥವಾ ಲಾಭಕ್ಕಿಂತಲೂ ಸೇವೆ ಎಂಬ ನೆಲೆಯಲ್ಲಿ ಮಾಡುತ್ತಿದ್ದು, ಇದು ಹರ್ಷ ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಚ್ಚುಕಟ್ಟುತನ, ಸಮಯ ಪ್ರಜ್ಞೆ, ಯೋಜನಾ ಬದ್ಧ ವಿಧಾನ, ಶಿಸ್ತಿಗೆ ಪರ್ಯಾಯ ಪದವೇ ಹರ್ಷ ಸಂಸ್ಥೆ. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ನಮ್ಮ ರಾಜ್ಯದ ಹೊರ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬೆಂಗಳೂರಿನಲ್ಲಿಯೂ ಹರ್ಷದ ಮಳಿಗೆಗಳನ್ನು ನೋಡಿದಾಗ ಆತ್ಮೀಯತೆ ಜತೆಗೆ ನಮ್ಮದು ಎಂಬ ಹೆಮ್ಮೆ ಮೂಡುತ್ತದೆ. ಹೊಸತನದ ಬಗ್ಗೆ ಕನಸು ಕಾಣುವುದು ಮಾತ್ರವಲ್ಲದೆ ಅದನ್ನು ಅನುಷ್ಠಾನಗೊಳಿಸುವುದರಲ್ಲಿ ಹರ್ಷ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ವಹಿಸಿ ದ್ದರು. ಚಿತ್ರಾಪುರ ಮಠದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಪಿ.ಕಡ್ಲೆ, ಸಿಂಡಿ ಕೇಟ್ ಬ್ಯಾಂಕಿನ ಮಣಿಪಾಲ ಕಚೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ, ಬ್ಲೋಸಂ ಪೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು. ಹರ್ಷ ಸಂಸ್ಥೆಯ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News