ಪುಲ್ವಾಮದಲ್ಲಿ ಯೋಧರ ಹತ್ಯೆ ಇಡೀ ಮಾನವೀಯತೆಯ ಹತ್ಯೆ: ರಾಬಿತಾ ಮಿಲ್ಲತ್

Update: 2019-02-16 17:42 GMT

ಭಟ್ಕಳ, ಫೆ. 16: ಪುಲ್ವಾಮದಲ್ಲಿ ಯೋಧರ ಹತ್ಯೆಯು ಇಡೀ ಮಾನವೀಯತೆಯ ಹತ್ಯೆಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಮುಸ್ಲಿಮ್ ಒಕ್ಕೂಟ ರಾಬ್ತಾ ಮಿಲ್ಲತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‍ ತಲ್ಹಾ ಸಿದ್ದಿಬಾಪ ಪ್ರತಿಕ್ರಿಯೆಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯ ನೀಡಿರುವ ಅವರು, ಉಗ್ರರ ಅಟ್ಟಹಾಸದಿಂದಾಗಿ ನಮ್ಮದೇಶದ ಯೋಧರು ಹುತಾತ್ಮರಾಗಿದ್ದಾರೆ. ಕಾಶ್ಮೀರದಲ್ಲಿ ನಡೆದಿರುವ ಯೋಧರ ಹತ್ಯೆಯನ್ನು ಉತ್ತರ ಕನ್ನಡ ಜಿಲ್ಲಾ ಮುಸ್ಲಿಮ್ ಒಕ್ಕೂಟ ರಾಬ್ತಾ ಮಿಲ್ಲತ್ ಸಂಸ್ಥೆ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೃತ್ಯವು ರಾಜಕೀಯ ಹಿತಾಸಕ್ತಿಗೆ ಬಲಿಯಾಗದೆ ಇದರ ಹಿಂದಿರುವ ಕೈಗಳು ತಪ್ಪಿಸಿಕೊಳ್ಳದಂತೆ ಕೇಂದ್ರ ಸರ್ಕಾರ ಜಾಗೃತೆ ವಹಿಸಬೇಕಾಗಿದೆ. ಭಾರತೀಯರೆಲ್ಲರೂ ಸೇರಿ ಇಂತಹ ಹೀನಾ ಕೃತ್ಯವನ್ನುಯಾವುದೇ ಜಾತಿ, ಧರ್ಮ, ಭಾಷೆಯ ಬೇಧವನ್ನು ತಾಳದೆ ಉಗ್ರವಾಗಿ ಖಂಡಿಸಬೇಕಿದೆ ಎಂದು ತಿಳಿಸಿದ ಅವರು, ನಮ್ಮ ದೇಶದ ಸೈನಿಕರು ಅವರ ಕುಟುಂಬದವರಿಗೆ ಸಾಂತ್ವಾನವನ್ನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News