ಫೆ.17: ಕಿನ್ಯದಲ್ಲಿ ಅನುಸ್ಮರಣಾ ಸಮ್ಮೇಳನ
Update: 2019-02-16 18:04 GMT
ಮಂಗಳೂರು, ಫೆ.16: ಎಸ್ಐಸಿ, ಎಸ್ವೈಎಸ್, ಎಸ್ಕೆಎಸ್ಸೆಸ್ಸೆಫ್ ಕಿನ್ಯ ಶಾಖೆಯ ವತಿಯಿಂದ ಶೈಖುನಾ ಅತ್ತಿಪಟ್ಟ ಉಸ್ತಾದ್ ಹಾಗೂ ಶೈಖುನಾ ಜಬ್ಬಾರ್ ಉಸ್ತಾದ್ ಮತ್ತು ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಫೆ.17ರಂದು ಸಂಜೆ 5:30ಕ್ಕೆ ಕಿನ್ಯ ಸಿ.ಎಚ್. ನಗರದಲ್ಲಿ ಬೃಹತ್ ಅನುಸ್ಮರಣಾ ಸಮ್ಮೇಳನ ನಡೆಯಲಿದೆ.
ಆನಮಂಙಾಡ್ ಮುಹಮ್ಮದ್ ಕುಟ್ಟಿ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸೈಯದ್ ಅಮೀರ್ ತಂಙಳ್, ಸೈಯದ್ ಬಾತಿಷಾ ತಂಙಳ್, ಫತ್ತಾಹ್ ಫೈಝಿ, ಖಾಸಿಂ ದಾರಿಮಿ, ಫಾರೂಖ್ ದಾರಿಮಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.