ದ.ಕ. ಜಿಲ್ಲಾ ಸಮಿತಿ ವತಿಯಿಂದ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ದ್ವಜರೋಹಣ

Update: 2019-02-17 13:11 GMT

ಮಂಗಳೂರು, ಫೆ. 17:  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸಂಸ್ಥಾಪನಾ ದಿನವನ್ನು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಹನೀಫ್ ಕಾಟಿಪಳ್ಳ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು.

"ದ್ವೇಷ ರಾಜಕೀಯವನ್ನು ಸೋಲಿಸಿ"ಎಂಬ ಧ್ಯೇಯ ವಾಕ್ಯದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮ್ಮದ್ ಹನೀಫ್ ಕಾಟಿಪಳ್ಳ  ವಹಿಸಿದ್ದರು.

ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿ ದೇಶಕ್ಕಾಗಿ ತಮ್ಮ ಪ್ರಾಣ  ತ್ಯಾಗ ಮಾಡಿದ ವೀರ ಯೋಧರಿಗಾಗಿ ಮೌನ ಪ್ರಾರ್ಥನೆ ನಡೆಸಿ ಗೌರವಿಸಲಾಯಿತು. ನಂತರ  ಮುಖ್ಯ ಅತಿಥಿಯಾಗಿ  ಆಗಮಿಸಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ಇಲಿಯಾಸ್ ಮೊಹಮ್ಮದ್  ತುಂಬೆ  ಪ್ರಸಕ್ತ ಭಾರತದಲ್ಲಿ ನಡೆಯುತಿರುವ ಸಾಮಾಜಿಕ ಅಸಮಾನತೆ ಶೋಷಿತರ ದಮನಿತರ ಧ್ವನಿಯಾಗಿ ಸಂವಿದಾನ ಬದ್ದವಾಗಿ ಸಂಘಟನೆ ಕಾನೂನು ಹೋರಾಟ ನಡೆಸುತಿದ್ದು   ಸರ್ವರೂ  ಈ ನಮ್ಮ ಹೋರಾಟದಲ್ಲಿ  ಕೈ ಜೋಡಿಸಬೇಕಾಗಿ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಮುನೀಬ್ ಬೆಂಗ್ರೆ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ವಿಧಾನಸಭಾ ಕ್ಷೇತ್ರ ಮಂಗಳೂರು ಅಧ್ಯಕ್ಷರಾದ ಸುಹೈಲ್ ಪಲ್ನೀರ್,ಸಿದ್ದೀಕ್ ಬೆಂಗರೆ, ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಯುನಿಯನ್ ಅದ್ಯಕ್ಷರಾದ ನೌಫಲ್ ಕುದ್ರೊಳಿ ಉಪಸ್ಥಿತರಿದ್ದರು.

ಹಾರಿಸ್ ಮಲಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News