ಸುಬ್ರಹ್ಮಣ್ಯ: ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ

Update: 2019-02-17 16:33 GMT

ಸುಬ್ರಹ್ಮಣ್ಯ, ಫೆ.17: ನಾಲ್ಕೂರು ಗ್ರಾಮದ ಜತ್ತಿಲ ಮನೆ ನಿವಾಸಿ ಪ್ರತಾಪ್ (24) ಎಂಬವರು ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ರವಿವಾರ ಸಂಜೆ ನಡೆದಿದೆ.

ಕೃಷಿಕ ಜತ್ತಿಲ ಜನಾರ್ಧನ ಎಂಬವರ ಪುತ್ರ  ಪ್ರತಾಪ್ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಬಳಿಕ ಸ್ಥಳಿಯವಾಗಿ ಸ್ವ ಉದ್ಯೋಗ ಆರಂಬಿಸಿದ್ದ. ರವಿವಾರ ಮನೆಯಲ್ಲಿ ಯಾರು ಇಲ್ಲದ  ವೇಳೆ ಅವರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News