ಅಂದರ್ ಬಾಹರ್: ನಾಲ್ವರ ಸೆರೆ
Update: 2019-02-18 17:13 GMT
ಪಡುಬಿದ್ರಿ, ಫೆ.18: ಹೆಜಮಾಡಿ ಗ್ರಾಮದ ಶಿವನಗರ ಪೂಂಜಾ ತೋಟ ಎಂಬ ಹಾಡಿಯಲ್ಲಿ ಫೆ.17ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣ (37), ಶ್ರೀಧರ್ ಕುಮಾರ್ (42), ತಾಜ್ಉದ್ದೀನ್ (39), ಮೋಹನ್ (40) ಬಂಧಿತ ಆರೋಪಿಗಳು. ಇವರಿಂದ 3,950ರೂ. ನಗದು ಹಾಗೂ ಮೂರು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.